ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಅವಮಾನ – ಖಂಡಿಸಿ ಡಿ.ಎಸ್.ಎಸ್ ತೀವ್ರ ಆಕ್ರೋಶದ ಒತ್ತಾಯ.

ಹೂವಿನ ಹಿಪ್ಪರಗಿ ಜ.27

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದಲ್ಲಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ 76 ನೇ. ಗಣರಾಜ್ಯೋತ್ಸವ ದಿನಾಚರಣೆಯ ಆಚರಿಸಿದೆ ಅವಮಾನ ನಡೆದ ಘಟನೆಯನ್ನು ಬಿಜ್ಜಳ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ ದಲಿತ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಮ ಪಂಚಾಯತಿ ಅಧಿಕಾರಿಗಳು ವಿರುದ್ಧ ಆಕ್ರೋಶ ಕೂಗಿದರು.

ದೇಶದ ಅದೆಷ್ಟೋ ರಾಷ್ಟ್ರಗಳು ಜ್ಞಾನದ ದೇಗುಲವನ್ನು ಅಪ್ಪಿಕೊಂಡು ಮೆಚ್ಚಿಕೊಂಡು ನಾ ಮುಂದು ತಾ ಮುಂದು ಅಂತಾ ಪೈಪೋಟಿ ಗೀಳಿದು ಪೂಜೆ ಪುರಸ್ಕಾರಗಳು ದೈನಂದಿನ ಪ್ರತಿ ನಿಮಿಷಗಳಲ್ಲಿ ಪ್ರಶಂಸನೀಯಕ್ಕೆ ಒಳಪಡುವ ವ್ಯಕ್ತಿ ಯಾರಾದರೂ ಅಖಂಡ ದೇಶದಲ್ಲಿ ಇದ್ರೆ ಅದು ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾ ಹೇಳಬಹುದು. ಇಡೀ ದೇಶ ಇಂದು ಪ್ರಶಂಸನೀಯಕ್ಕೆ ಒಳಪಟ್ಟಿದೆ ಎಂದರೆ ಅದು ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರಕಾಶವಾಗಿ ಪ್ರಜ್ವಲಿಸುತಿದೆ ಎಂದು ಡಿ.ಎಸ್.ಎಸ್ ಹೋರಾಟಗಾರರ ಹೇಳಿಕೆ ಆಗಿದೆ.

ದೇಶದಲ್ಲಿ ಇನ್ನೂ ಕೂಡ ತಾರತಮ್ಯ ತಾಂಡವಾಡುತ್ತಿದೆ ಅನ್ನುವುದಕ್ಕೆ ಬೇರೆ ಉದಾಹರಣೆ ಬೇಕಿಲ್ಲ ಅವರು ಯಾರೇ ಆಗಿರಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಇನ್ನೆನಾದರೂ ಅವಮಾನ ಅಗೌರವದಿಂದ ಕಂಡು ಬಂದಲ್ಲಿ ಅವರು ಯಾರೇ ಇರಲಿ ಎಷ್ಟೇ ಪ್ರಬಲ ಪ್ರಭಾವಿ ಇರಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಗಡಿಪಾರು ಮಾಡಬೇಕೆಂದು ಡಿ.ಎಸ್.ಎಸ್ ಹೋರಾಟಗಾರರ ತೀವ್ರ ಆಕ್ರೋಶದ ಒತ್ತಾಯ ಆಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ. ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button