ಕರ್ನಾಟಕದ ಯುವಕರಿಗಾಗಿ ಕೆ.ಆರ್‌.ಎಸ್‌ ಪಕ್ಷದಿಂದ – ಹಕ್ಕೊತ್ತಾಯದ ಸಮಾವೇಶ.

ಬೆಳಗಾವಿ ಜ.27

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕದ ಕನ್ನಡಿಗರ ಲಕ್ಷಾಂತರ ಯುವಕರ, ಯುವತಿಯರ ವಿದ್ಯಾರ್ಥಿಗಳಿಗೆ ಅನುಕೂಲ ವಾಗುವಂತಹ ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲವಾದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿತ್ತು.

ರಾಷ್ಟ್ರೀಯ ಯುವ ಸಮಾವೇಶ ಕಾರ್ಯಕ್ರಮದಲ್ಲಿ ಕೆ.ಆರ್‌.ಎಸ್ ಪಕ್ಷದ ವತಿಯಿಂದ ರಾಜ್ಯದ ಲಕ್ಷಾಂತರ ಇವರಿಗೆ ಇರುವಂತಹ ಸಮಸ್ಯೆಗಳು, ಕುಂದು-ಕೊರತೆಗಳು, ಉದ್ಯೋಗದಲ್ಲಿ ತಾರತಮ್ಯ ಹಾಗೂ ಬ್ರಷ್ಟಾಚಾರ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹಂತ ಹಂತವಾಗಿ ರಾಜ್ಯದ ತುಂಬೆಲ್ಲ ಹೋರಾಟಗಳನ್ನ, ಅಭಿಯಾನಗಳನ್ನ, ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುತ್ತದೆ ಎಂದು ಕೆಆರ್‌.ಎಸ್‌. ಪಕ್ಷದ ರಾಜ್ಯಾಧ್ಯಕ್ಷರ ರವಿಕೃಷ್ಣ ರೆಡ್ಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಕಾಂಗ್ರೆಸು, ಬಿಜೆಪಿ, ಜೆಡಿಎಸ್ ಪಕ್ಷಗಳು ರಾಜ್ಯದ ಯುವಕ ಯುವತಿಯರಿಗೆ, ಕನ್ನಡಿಗರಿಗೆ ಮೋಸ ಮಾಡುತ್ತಿದ್ದಾರೆ. ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಹಲವಾರು ಸುಳ್ಳು ಪೋಳ್ಳು ಭರವಸೆಗಳನ್ನ ನೀಡಿ ಯುವಕರ ಮನಸ್ಸನ್ನು ಬದಲಾಯಿಸಿ ಮತಗಳನ್ನು ಪಡೆದು ಈಗ ಯುವಕರಿಗೆ ಬೇಕಾದಂತ ಮೂಲಭೂತ ಸೇವೆ, ಸೌಲಭ್ಯಗಳು, ಸೌಕರ್ಯಗಳನ್ನು ನೀಡುವಲ್ಲಿ ವಿಫಲವಾಗಿವೆ.

ಹಾಗಾಗಿ ಯುವಕರು ಜಾಗೃತರಾಗ ಬೇಕು ಕೆ.ಆರ್‌.ಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನ ಒಪ್ಪಿ ಕೆ.ಆರ್‌.ಎಸ್ ಪಕ್ಷದ ನಾಯಕರಾಗ ಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ರಘು ಜಾಣಗೆರೆ, ಜ್ಞಾನ ಸಿಂಧು ಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್ ಬೆಳಗಾವಿ ಜಿಲ್ಲಾ ಉಸ್ತುವಾರಿ ಬಿ.ಜಿ ಕುಂಬಾರ್, ಜಿಲ್ಲಾಧ್ಯಕ್ಷ ಸಿದ್ದು ಕಣ್ಣಗ್ಬುರ್ಗಿ ಸೇರಿದಂತೆ ಹಲವಾರು ರಾಜ್ಯ ಸಮಿತಿ ಜಿಲ್ಲಾ ಸಮಿತಿ ಸದಸ್ಯರು ಹಾಗೂ ರಾಜ್ಯದ ಮೂಲೆ ಮೂಲೆಯಿಂದ ಬಂದ ಪಕ್ಷದ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button