ಮೈಕ್ರೋ ಯೋಜನೆಗೆ ಚಾಲನೆ ನೀಡಿದ – ಶಾಸಕ ಹಂಪಯ್ಯ ನಾಯ್ಕ್.
ಮುಸ್ಟೂರು ಏ.30

ಮಾನ್ವಿ ವಿಧಾನ ಸಭಾ ಕ್ಷೇತ್ರದ ಮುಸ್ಟೂರು ಕ್ರಾಸ್ ನಿಂದ ಜಗೀರ್ ಪನ್ನೀರ್ ಗ್ರಾಮವನ್ನು ಸಂಪರ್ಕಿಸುವ ಮಾರ್ಗ ಮಧ್ಯದ ಹಳ್ಳಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮೈಕ್ರೋ ಯೋಜನೆ ಅಡಿಯಲ್ಲಿ 2₹ ಕೋಟಿ 60 ಲಕ್ಷ ರೂ ವೆಚ್ಚದ ಬಾಕ್ಸ್ ಕಲ್ವರ್ಟ್ ನಿರ್ಮಾಣ ಕಾಮಗಾರಿಗೆ ಮಾನ್ವಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಹಂಪಯ್ಯ ನಾಯಕ್ ಅವರೊಂದಿಗೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು. ಕಾಮಗಾರಿಯನ್ನು ಗುಣಮಟ್ಟ ದೊಂದಿಗೆ, ತ್ವರಿತ ಗತಿಯಲ್ಲಿ ಪೂರ್ಣ ಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶ್ರೀ ಶರಣಯ್ಯ ನಾಯಕ ಗುಡದಿನ್ನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಬ್ದುಲ್ ಗಫೂರ್ ಸಾಬ್, ಶ್ರೀ ಕೆ.ಶಾಂತಪ್ಪ, ಶ್ರೀ ಜಯಣ್ಣ, ಶ್ರೀ ದೊಡ್ಡಬಸ್ಸಪ್ಪ ಗೌಡ, ಶ್ರೀ ಬಿ.ಕೆ ಅಮರೇಶಪ್ಪ, ಶ್ರೀ ಬಾಲಸ್ವಾಮಿ ಕೊಡ್ಲಿ, ಶ್ರೀ ರುದ್ರಪ್ಪ ಅಂಗಡಿ, ಶ್ರೀ ಖಾಲೀದ್ ಸಾಹೆಬ್, ಶ್ರೀ ರೌಡೂರು ಮಹಾಂತೇಶ ಸ್ವಾಮಿ, ಶ್ರೀ ಸುಭಾಸ್ ನಾಯಕ, ಶ್ರೀ ಹನುಮೇಶ ಮದ್ಲಾಪೂರ, ಶ್ರೀ ಚಂದ್ರಶೇಖರ್ ಕುರ್ಡಿ, ಶ್ರೀ ಬಸವರಾಜ ಪಾಟೀಲ್ ಹತ್ತನೂರ ಸೇರಿದಂತೆ ಅನೇಕರು ಹಾಜರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ