ಬೆಂಗಳೂರಲ್ಲಿ ಮಹನೀಯರ ಜಯಂತಿಗೆ – ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಡಿ.ಎಸ್.ಎಸ್ ದಿಂದ ಕರೆ.
ಬಾಗಲಕೋಟೆ ಏ.29

ಕರ್ನಾಟಕ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿಯ ದಲಿತ ಸೂರ್ಯ ಮಹಾತ್ಮ ಪ್ರೊ ಬಿ, ಕೃಷ್ಣಪ್ಪ ನವರ ಆದರ್ಶಗಳು ಮತ್ತು ಹೋರಾಟಗಳ ಆಶಯಗಳನ್ನು ಹೊತ್ತು ಸಾವಿರಾರು ವರ್ಷಗಳ ಅಸ್ಪೃಶ್ಯತೆಯ ಆಚರಣೆ, ಗುಲಾಮಗಿರಿ ಕೊಲೆ ಅತ್ಯಾಚಾರ ಜೀತ ಪದ್ಧತಿ ದೇವದಾಸಿ ಪದ್ಧತಿ ಅಸಮಾನತೆಯ ಶೋಷಣೆಯಲ್ಲಿ ನಲುಗಿದ ಸಮುದಾಯಗಳಿಗೆ ಸಮಾನತೆ ಯೊಂದಿಗೆ ನಾಗರಿಕರಾಗಿ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಅನೇಕರಲ್ಲಿ ಅನೇಕರಾದ ಗೌತಮ್ಬುದ್ಧ, ಜಗಜ್ಯೋತಿ ಬಸವಣ್ಣ, ಜ್ಯೋತಿಬಾ ಪುಲೆ, ಸಾವಿತ್ರಿ ಬಾಯಿ ಪುಲೆ, ನಾರಾಯಣ ಗುರು, ಪೆರಿಯಾರ್ ರಾಮಸ್ವಾಮಿ, ರಾಷ್ಟ್ರಪಿತ ಭಾರತ ರತ್ನ ಡಾ, ಬಾಬಾ ಸಾಹೇಬ್ಅಂಬೇಡ್ಕರ್, ಮತ್ತು ಹಸಿರು ಕ್ರಾಂತಿಯ ಹರಿಕಾರಾದ ಡಾ, ಬಾಬು ಜಗಜೀವರಾಮ್ ರವರು ತಮ್ಮ ಕೊನೆಯ ಉಸಿರು ಇರುವ ತನಕ ಸಮಾನತೆಯ ಸಂಗ್ರಾಮಕ್ಕಾಗಿ ಹೋರಾಟ ಮಾಡಿದ್ದಾರೆ. ಈ ಮಹನೀಯರ ಹರಿಕಾರರಲ್ಲಿ ಮೊದಲಿಗರಾದ ಜಗಜ್ಯೋತಿ ಬಸವಣ್ಣ ನವರ 892 ನೇ. ಡಾ, ಬಾಬಾ ಸಾಹೇಬ ಅಂಬೇಡ್ಕರ್ ರವರ 134 ನೇ. ಹಾಗೂ ಡಾ, ಬಾಬು ಜಗಜೀವನ್ ರಾಮ್ ರವರ 118 ನೇ. ಜಯಂತಿಯನ್ನು ಬೆಂಗಳೂರಿನ ಗಾಂಧಿ ಭವನದಲ್ಲಿ ದಿನಾಂಕ 30/04/2025 ಬುಧವಾರ ದಂದು ರಾಜ್ಯ ಸಂಚಾಲಕರಾದ ತರೀಕೆರೆ ಎನ್. ವೆಂಕಟೇಶ್, ರಾಜ್ಯ ಸಂಘಟನಾ ಸಂಚಾಲಕರಾದ ಮಾರುತಿ.ಬಿ ಹೊಸಮನಿ ಬಾಗಲಕೋಟ, ರಾಜ್ಯ ಸಂಘಟನಾ ಸಂಚಾಲಕರಾದ ಶಿವಾನಂದ.ಎಂ ಸಾವಳಗಿ ಕಲಬುರ್ಗಿ, ರಾಜ್ಯ ಸಂಘಟನಾ ಸಂಚಾಲಕರಾದ ಮ್ಯಾಥ್ಯೂ ಮುನಿಯಪ್ಪ ಬೆಂಗಳೂರು, ರಾಜ್ಯ ಸಂಘಟನಾ ಸಂಚಾಲಕರಾದ ರಾಜಶೇಖರ್ ಜಾಪನೂರ ಬೆಂಗಳೂರು, ರಾಜ್ಯ ಸಂಘಟನಾ ಸಂಚಾಲಕರಾದ ವೆಂಕಟರಾಮಪ್ಪ ಕೋಲಾರ್, ರಾಜ್ಯ ಸಂಘಟನಾ ಸಂಚಾಲಕರಾದ ನಂಜಪ್ಪ.ಕೆ ಮೈಸೂರು, ರಾಜ್ಯ ಖಜಾಂಚಿಯಾದ ಮಹದೇವ ಪ್ರಸಾದ್ ಬೆಂಗಳೂರು, ರಾಜ್ಯ ಸಂಘಟನಾ ಸಂಚಾಲಕರಾದ ಲೋಕೇಶ್ ಬೆಂಗಳೂರು, ಬೆಳಗಾವಿ ವಿಭಾಗಿಯ ಸಂಚಾಲಕರಾದ ಹಣಮಂತ ಹಿರೇಮನಿ, ಮೈಸೂರು ವಿಭಾಗೀಯ ಸಂಚಾಲಕರಾದ ಕೀರ್ತಿಕುಮಾರ್, ಎಂ.ವಿ ಭವಾನಿ ರಾಜ್ಯ ಸಂಚಾಲಕರು ಕೈ.ದ ಮಹಿಳಾ ಒಕ್ಕೂಟ, ಪಿ. ವಿಜಯಲಕ್ಷ್ಮೀ ಗೋಪಲ್. ರಾಜ್ಯ ಸಂ.ಸಂಚಾಲಕರು ಕೆ.ದ ಮಹಿಳಾ ಒಕ್ಕೂಟ, ನಿರ್ಮಲ ರಾಜ್ಯ ಸಂಚಾಲಕರು ಕೈ.ದ ಮಹಿಳಾ ಒಕ್ಕೂಟ, ಕೋಮಲ. ಮೂಡಿಗೆರೆ ಜಿಲ್ಲಾ ಸಂಚಾಲಕರು ಕೈ.ದ ಮಹಿಳಾ ಒಕ್ಕೂಟ ಮುಂತಾದ ಗಣ್ಯರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಸಮಾನತೆಯ ಹರಿಕಾರರ ಜಯಂತಿಯನ್ನು ನೆರವೇರಿಸುವುದು ಜಿಲ್ಲಾ ಪದಾಧಿಕಾರಿಗಳು ತಾಲ್ಲೂಕಿನ ಪದಾಧಿಕಾರಿಗಳು ಗುರು ಹಿರಿಯರು ಸಮಾನ ಮನಸ್ಕರು ತಾವು ಬನ್ನಿ ತಮ್ಮವರನ್ನು ಕರೆ ತನ್ನಿ ಎಂದು ಜಿಲ್ಲಾ ಸಂಚಾಲಕರು ಹಾಗೂ ಸಿಹಿ ಕಹಿ ಕನ್ನಡ ದಿನ ಪತ್ರಿಕೆಯ ರಾಜ್ಯ ವಿಶೇಷ ವಾರದಿಗಾರಾದ ಯಮನೂರ.ಸಿ ಹಲಗಿ ಶಿರೂರ ಇವರು ಕರೆ ನೀಡಿದ್ದಾರೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಯಮನೂರ.ಸಿ.ಹಲಗಿ.ಶಿರೂರು. ಬಾಗಲಕೋಟೆ