ಕೆ.ಹೊಸಹಳ್ಳಿ ವಿಶ್ವಗುರು ಬಸವಣ್ಣ ಜಯಂತಿ ಅಂಗವಾಗಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಕಾರ್ಯಕ್ರಮ.
ಕೆ.ಹೊಸಹಳ್ಳಿ ಮೇ.02

ಸಿಂಧನೂರು ತಾಲೂಕಿನ ತುರವಿಹಾಳ ಸಮೀಪದ ಕೆ. ಹೊಸಹಳ್ಳಿ ಗ್ರಾಮದ ಶ್ರೀ ವೀರಭದ್ರೆಶ್ವರ ದೇವಸ್ಥಾನ ಹತ್ತಿರ ವನಸಿರಿ ಪೌಂಡೇಷನ್ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ವಿಶ್ವಗುರು ಬಸವಣ್ಣ ಜಯಂತಿ ಅಂಗವಾಗಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಮನುಷ್ಯರಾಗಿ ಹುಟ್ಟಿದ ಮೇಲೆ ನಾವು ಸಕಲ ಜೀವ ರಾಶಿಗಳಿಗೆ ಸ್ವಲ್ಪ ಮಟ್ಟಿಗೆ ಸಹಾಯ ಮಾಡುವ ಮೂಲಕ ಮನುಷ್ಯ ಜನ್ಮ ಸಾರ್ಥಕ ಮಾಡಿ ಕೊಳ್ಳೋಣ.ಸಕಲ ಜೀವ ರಾಶಿಗಳ ಮೇಲೆ ದಯೇ ತೋರುವ ಮೂಲಕ ಜಗಜ್ಯೋತಿ ಬಸವಣ್ಣ ನವರ ಹಾದಿಯಲ್ಲಿ ನಡೆಯೋಣ. ಆಗ ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದು ವನಸಿರಿ ಪೌಂಡೇಷನ್ ಸದಸ್ಯ ಚನ್ನಪ್ಪ ಕೆ.ಹೊಸಹಳ್ಳಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರದಲ್ಲಿ ಮಾತನಾಡಿದರು.
ನಂತರ ಹಳೆಯ ವಿದ್ಯಾರ್ಥಿ ಸಂಘದ ಸದಸ್ಯ ವೀರಭದ್ರಯ್ಯ ಸ್ವಾಮಿ ಕೆ.ಹೊಸಹಳ್ಳಿ ಗ್ರಾಮದ ಶಾಲೆ, ದೇವಸ್ಥಾನ ಹಾಗೂ ರಸ್ತೆಗಳಲ್ಲಿ ಗಿಡ ಮರಗಳಿಂದ ಕಂಗೊಳಿಸುತ್ತಿವೆ ಅಂದರೆ ಅದಕ್ಕೆ ನಮ್ಮ ವನಸಿರಿ ತಂಡ ಹಾಗೂ ಹಳೆಯ ವಿದ್ಯಾರ್ಥಿಗಳ ಪರಿಶ್ರಮವೇ ಕಾರಣ ಎಂದು ನುಡಿದರು.ನಂತರ ಗ್ರಾಮದ ಯುವಕ ಹಾಗೂ ಯುವ ಸಾಹಿತಿ ದುರಗೇಶ ಮಾತನಾಡಿ ಬಸವಣ್ಣ ನವರು ಅನುಭವ ಮಂಟಪ ನಿರ್ಮಿಸಿ ಸಮಾಜದಲ್ಲಿ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಕಲ್ಯಾಣ ಕ್ರಾಂತಿ ಮಾಡಿದರು.

ಆದರೆ ಕೆ.ಹೊಸಹಳ್ಳಿ ಗ್ರಾಮ ಇಂದು ಹಸಿರು ಕ್ರಾಂತಿ ಹೊಂದಲು ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಮತ್ತು ನಮ್ಮೂರಿನ ಚನ್ನಪ್ಪ ವಿಶ್ವಕರ್ಮ ಅವರು ಕಾರಣ ಅವರಿಗೆ ನನ್ನ ಅಭಿನಂದನೆಗಳು ಎಂದು ತಿಳಿಸಿದರು.ಈ ಸಂಧರ್ಭದಲ್ಲಿ ದೇವಸ್ಥಾನ ಅರ್ಚಕರಾದ ಶಿವಯ್ಯ ಸ್ವಾಮಿ, ಹಿರಿಯರಾದ ಬಸವರಾಜ ಕಾರಲಕುಂಟಿ, ವನಸಿರಿ ಪೌಂಡೇಷನ್ ಸದಸ್ಯ ಚನ್ನಪ್ಪ ವಿಶ್ವಕರ್ಮ, ವೀರಭದ್ರಯ್ಯ ಸ್ವಾಮಿ, ದುರಗೇಶ, ಮರೇಗೌಡ, ರಮೇಶ ಉಳ್ಳಿ ಇನ್ನಿತರರು ಪಾಲ್ಗೊಂಡಿದ್ದರು.