“ಸ್ವಾರ್ಥ ದುಷ್ಟ ದಶಮುಖಿಗಳ ಸೋಲಿಸಿ”…..

ಜ್ಞಾನವಿಲ್ಲದ ಮೆದಳುಗಳು
ಕರುಣೆವಿಲ್ಲದ ಕರುಳಬಳ್ಳಿಗಳು
ಶುಭ ಯಶಸ್ವಿಗೆ ಹಾರೈಸದ ಮನಗಳು
ದುಃಖ ಆವರಿಸಿದಾಗ ಸ್ಪಂದಿಸದೇ
ಕೇಡುಬಯಸುವ ದುರಾತ್ಮಭಾವಗಳು
ನಿಸ್ವಾರ್ಥ ಸೇವೆಗೆ ಗೊಣಗುವ
ಹೃದಯ ಶೂನ್ಯರು
ಸ್ವಾರ್ಥಕ್ಕಾಗಿ ಮುನ್ನುಗ್ಗುವ ಪಿಶಾಚಿಗಳು
ಶತಮೂರ್ಖ ಅವತಾರಿಗಳು
ಕಲಿಯುಗದ ನಿಜ ದಶಾವತಾರಿಗಳು
ಸ್ವಾರ್ಥ ದುಷ್ಟ ದಶಮುಖಿಗಳ ಸೋಲಿಸಿ
ಮಾನವೀಯ ಮೌಲ್ಯಾಧಾರಿತದವರ
ನಿಜ ಮನುಜರ ಗೆಲ್ಲಿಸಿ
ನಾಡ ನುಡಿ ಸಮಾಜ ಕುಟುಂಬದ
ಏಳಿಗೆಯ ಹಿತೋಪಾಸಕರು
ಜಗದ ಆದರ್ಶತನದ ರೂವಾರಿಗಳು

ಶ್ರೀ ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ.