ಕೆರುಟಗಿ ಗ್ರಾಮದ ರೈತರಿಗೆ ಬೇಳೆ ವಿಮೆ ಜಮೆ ಆಗದ ಕಾರಣ ಗ್ರಾಮದ ರೈತರಿಂದ, ಗ್ರಾಮಸ್ಥರಿಂದ,ಉಗ್ರವಾದ ಹೋರಾಟ, ಮತ್ತು ತಹಶೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿ – ಮನವಿ ಸಲ್ಲಿಸಲಾಯಿತು.
ಕೆರುಟಗಿ ಮೇ.07

ವಿಜಯಪೂರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕೀನ, ಕೆರುಟಗಿ ಗ್ರಾಮದಲ್ಲಿನ ರೈತರುಗಳಿಗೆ ಬೇಳೆ ವಿಮೆ ತುಂಬಿದ್ದರು ಕೂಡಾ ಬೇಳೆ ವಿಮೆ ಜಮೆ ಆಗಿಲ್ಲದಂತಹ ಸಮಸ್ಯೆ ಎದುರಾಗಿ. ಬೇಳೆ ವಿಮೆ ಜಮೆ ಆಗದೆ ಇದ್ದದ್ದಕ್ಕೆ ಆಕ್ರೋಶ ಗೊಂಡ ಕೆರುಟಗಿ ಗ್ರಾಮದ ರೈತರು, ಗ್ರಾಮಸ್ಥರು, ಇವತ್ತು ಹೋರಾಟವನ್ನು ಹಮ್ಮಿಕೊಂಡು, ತಹಶೀಲ್ದಾರ ಕಛೇರಿಗೆ ಮುತ್ತಿಗೆ ಹಾಕಿ, ಗ್ರಾಮದ ರೈತರಿಗೆ ಬೇಳೆ ವಿಮೆ ಹಣವನ್ನು ಜಮೆ ಆಗದೆ ಇದ್ದದ್ದು ತಹಶೀಲ್ದಾರ್ ರಾದ ಪ್ರಕಾಶ ಸಿಂದಗಿ ಇವರಿಗೆ ಗಮನಕ್ಕೆ ತಂದು ಮನವಿಯನ್ನು ಸಲ್ಲಿಸಲಾಯಿತು.

ಇದೆ ಸಂದರ್ಭದಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ ಸದಸ್ಯರ ಪ್ರತಿ ನಿಧಿಯಾದ ಸಿದ್ದು ಬುಳ್ಳಾರವರು, ಕೇವಲ ಒಂದು ಸಾವಿರ ಹಣ ಕೋಟ್ಟಂತವರಿಗೆ ಮಾತ್ರ, ಬೇಳೆ ವಿಮೆ ಜಮೆ ಆಗಿದ್ದು, ಬೇಳೆ ವಿಮೆ ತುಂಬಿದ ರೈತರಿಗೆ, ಬೇಳೆ ವಿಮೆ ಹಣ ಜಮೆ ಆಗಿಲ್ಲ.ಬೇರೆ ಊರಿನ ಗ್ರಾಮದ ರೈತರ ಹಣ ನಮ್ಮ ಊರಲ್ಲಿ ಜಮೆ ಆಗಿದೆ.

ನಮ್ಮೂರಿನ ರೈತರಲ್ಲಿ ಬರಿ ಕೇವಲ ಹತ್ತು ಹದಿನೈದು ಜನ ರೈತರಿಗೆ ರೈತರನ್ನು ಬಿಟ್ಟರೆ ಮತ್ತೆ, ಯಾರಿಗೂ ಜಮೆ ಆಗಿಲ್ಲ. ಇದೆ ರೀತಿಯಾಗಿ ನಮ್ಮೂರಿನ ರೈತರಿಗೆ ಅನ್ಯಾಯವಾದರೆ ನಾನು ಸಹಿಸುವುದಿಲ್ಲ, ನಾವು ಸಹಿಸುವುದಿಲ್ಲ. ಮುಂದಿನ ದಿನ ಮಾನಗಳಲ್ಲಿ ರಸ್ತೆ ಬಂದ್ ಮಾಡಿ ಹೋರಾಟ ಮಾಡಲಾಗುವುದು ಮತ್ತು ಇದಕ್ಕೂ ಜಗದೆ ಬಗ್ಗದೆ ಹೋದರೆ ಆಮರಣಾಂತರ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡು ಉಗ್ರವಾದ ಹೋರಾಟ ಕೈ ಗೋಳ್ಳಲ್ಲಾಗುವುದು ಎಂದು ತಮ್ಮ ರೋಷಾ ಆವೇಶದ ಭಾಷಣದ ಮೂಲಕ ತಹಶೀಲ್ದಾರ್ ರವರಿಗೆ ರೈತರಿಗಾದ ಅನ್ಯಾಯವನ್ನು ತಿಳಿಸಿ ತಮ್ಮ ನೋವನ್ನು ತೋಡಿ ಕೊಂಡರು.

ಈ ಹೋರಾಟದಲ್ಲಿ ಮಲಕಾಜಯ್ಯ ಮುತ್ಯಾ, ಸುಭಾಸ್ ಸಹುಕಾರ ಚಟ್ಟರಕಿ ಕುಮಾರ ಚಟ್ಟರಕಿ, ಕಲ್ಲಯ್ಯ ಮುತ್ಯಾ, ಅಜಮೀರ ಸಾಬ್ ಚೌದರಿ, ಮಲ್ಲಣ್ಣಗೌಡ , ಕಾಡಪ್ಪ ಗೌಡ ಬಿರಾದಾರ, ಗ್ರಾಮ ಪಂಚಾಯತ್ ಸದಸ್ಯ ಸಿದ್ರಾಮಪ್ಪ ಮಾದರ. ಏಸಣ್ಣ ಗೌಡ ಬಿರಾದಾರ, ಚಂದಪ್ಪ ಪೂಜೆರಿ ಮಕ್ತುಮ್ ಸಾಬ್ ಚೌದರಿ, ಮಲಕಪ್ಪ ನಾಯ್ಕೊಡಿ ಶಿವಪ್ಪ ಹುಡೇದ, ಮಕ್ತುಮ ಸಾಬ್ ಚೌದರಿ, ಗೋಲ್ಲಾಳಪ್ಪ ಗೌಡ ಲಾಯದಗುಂದಿ, ಮೈಲಗುಲ್ಲಿ ಬುಡ್ಡೆಸಾಬ, ಬಾಗವಾನ, ಶರಣಪ್ಪ ಗುಡಿಮನಿ , ಅಂಬಾಬಾಯಿ ಜಮಾದರ ಮಡೆಮ್ಮ ಪೂಜೆರ್ತಿ ಗಂಗಾಬಾಯಿ ಜಮಾದಾರ ಬಸಪ್ಪ ಮಾದರ, ಮರಳಪ್ಪ ಬಿಳಗಿ, ನಿಂಗಪ್ಪ ಮಾದರ ಲಚ್ಚೇಮ್ಮ ಜಮಾದಾರ ಗ್ರಾಮದ ಹಿರಿಯರು, ಮುಖಂಡರು ಮಹಿಳೆಯರು, ಗ್ರಾಮಸ್ಥರು, ಬಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ,