ಹಲವಾರು ಚಳುವಳಿ ಮಾಡುವ ಮೂಲಕ ಎಲ್ಲಾ ಸರ್ಕಾರಗಳಿಗೆ – ಮಾದಿಗ ಸಮುದಾಯ ಎಚ್ಚರಿಕೆ ಕೊಟ್ಟಿದೆ.

ಗಜೇಂದ್ರಗಡ ಮೇ.07

ರಾಜ್ಯ ಸರಕಾರ ಕಣ್ಣು ತೆರೆದಿದ್ದು ನಾವು ಎಚ್ಚರಿಕೆ ಯಿಂದ ನಾನು ‘ಮಾದಿಗ”ಎಂದು ಹೆಸರು ನಮೂದಿಸಲು ಮಂಜುನಾಥ್ ಬುರುಡಿ ಮತ್ತು ಅವರ ತಂಡ ಅನೇಕ ಹಳ್ಳಿಗಳಿಗೆ ಭೇಟಿ ನೀಡುವುದರ ರೊಂದಿಗೆ ಕರ ಪತ್ರ ಕೊಡುವುದರ ಮೂಲಕ ಮನವಿ ಗಜೇಂದ್ರಗಡ. ಮೇ 5.6.7 ರಂದು ಜನ ಗಣತಿ ಪರಿಶಿಷ್ಟ ಜಾತಿ ರಾಜ್ಯ ಸರ್ಕಾರ ನಡೆಸುತ್ತಿದ್ದು ಆದ್ದರಿಂದ ಗಜೇಂದ್ರಗಡ ತಾಲೂಕಿನ ದಲಿತ ಮುಖಂಡರಿಂದ ಗಜೇಂದ್ರಗಡ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮ ಮಾಟರಂಗಿ, ಗೋಗೇರಿ, ನಾಗರಸಕೊಪ್ಪ, ಚಿಲಝೇರಿ, ಹಾಲಕೆರೆ, ಬೆಚಮಟ್ಟಿ, ರಾಂಪೂರ, ವದೇಗೋಳ, ಹಿರೆಕೊಪ್ಪ, ವೀರಾಪೂರ, ಸೂಡಿ, ದ್ಯಾಮುಣಸಿ, ಬೆನಕಟ್ಟಿ, ಪುರ್ತಗೇರಿ, ನರೇಗಲ್ಲ, ನಿಡಗುಂದಿ, ಹಿರೇಅಳಗುಂಡಿ‌, ಚಿಕ್ಕಾಳಗುಂಡಿ, ಶಾಂತಗೇರಿ ಇನ್ನೂ ಅನೇಕ ಹಳ್ಳಿಗಳ ಮನೆಗೆ ಭೇಟಿ ನೀಡಿ ನಮ್ಮ “ಮಾದಿಗ” ಸಮಾಜ ದವರಿಗೆ ಸುಮಾರು 101 ಜಾತಿಗಳು ಎಸ್.ಸಿ ಪಟ್ಟಿಯಲ್ಲಿ ಬರುತ್ತಾರೆ ನಾವು ಸೌಲಭ್ಯ ದಿಂದ ವಂಚಿತರಾಗಿದ್ದೇವೆ ಸುಮಾರು 30 ವರ್ಷಗಳಿಂದ ಸತತವಾಗಿ ಚಳುವಳಿ ಮಾಡುವ ಮೂಲಕ ಸರಕಾರಗಳಿಗೆ ಎಚ್ಚರಿಕೆ ಕೊಟ್ಟಿದ್ದೇವೆ ಈಗ ಎಚ್.ಎನ್ ನಾಗಮೋಹನ್ ದಾಸ್ ಅವರ ಆಯೋಗ ಪರಿಶಿಷ್ಟ ಜಾತಿ ಜನ ಗಣತಿ ನಡೆಸುತ್ತಿದ್ದು, ನಾವು ಎಚ್ಚರಿಕೆ ಯಿಂದ ಕ್ರಮ ಸಂಖ್ಯೆ 61 ರಲ್ಲಿ ಕಡ್ಡಾಯವಾಗಿ “ಮಾದಿಗ’ ಎಂದು ಬರೆಸುವುದರ ಮೂಲಕ ನಮ್ಮ ಹಕ್ಕು ನಾವು ಪಡೆಯ ಬೇಕಾಗಿದೆ 2012 ರಲ್ಲಿ ಬೆಳಗಾಂವ ಸುವರ್ಣ ಸೌಧದ ಮುಂದೆ ಪೊಲೀಸರು ಲಾಠಿಗೆ ಹಲವಾರು ನಮ್ಮ ಅಣ್ಣ ತಮ್ಮಂದಿರು ಕೈ ಕಾಲುಗಳನ್ನು ಮುರಿದು ಕೊಂಡು ಇನ್ನೂ ಕೂಡ ಮನೆಯಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ.

2016 ರಲ್ಲಿ ಹುಬ್ಬಳ್ಳಿ ಸಮಾವೇಶಕ್ಕೆ ಬರುವಾಗ ಬಸವ ಕಲ್ಯಾಣದ ನಮ್ಮ ಅಣ್ಣ ತಮ್ಮಂದಿರು ಎಂಟು ಜನ ಮರಣ ಹೊಂದಿದರು. ಸಮುದಾಯಕೋಸ್ಕರ ಅದೆಷ್ಟೋ ಹೋರಾಟಗಾರರು ತಮ್ಮ ತಮ್ಮ ತನು ಮನ ತ್ಯಾಗ ಮಾಡಿದ್ದಾರೆ. 30 ವರ್ಷಗಳ ಕಾಲ ಸರ್ಕಾರ ನಮ್ಮ ಸಮುದಾಯಕ್ಕೆ ವಂಚನೆ ಮಾಡುತ್ತಾ ಬಂದಿದ್ದೆ ಈಗಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಂದಿನ 2016 ಹುಬ್ಬಳ್ಳಿ ಸಮಾವೇಶದಲ್ಲಿ ದುರ್ಮರಣ ಹೊಂದಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದರು ಮರಣ ಹೊಂದಿದ್ದ ಕುಟುಂಬಸ್ಥರಿಗೆ ಸೌಜನ್ಯಕ್ಕಾದರೂ ಭೇಟಿ ಮಾಡದಿರುವುದು ಖಂಡನೀಯ ಇನ್ನೂ ಅರೆಬೆತ್ತಲೆ ಮೆರವಣಿಗೆ ರಸ್ತೆ ರೊಖ್ ಚಳುವಳಿ ಬೃಹತ್ ಪ್ರತಿಭಟನೆ ಡಿಸಿ ಆಫೀಸ್ ಮುತ್ತಿಗೆ ಹಲವಾರು ಚಳುವಳಿ ಮಾಡಿದೆವು ಒಳ ಮೀಸಲಾತಿ ಜಾರಿಗಾಗಿ ಬಿ.ಆರ್ ಭಾಸ್ಕರ ರವರು ಮತ್ತು ಅವರ ತಂಡ ಕ್ರಾಂತಿ ಕಾರಿ ಪಾದಯಾತ್ರೆ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಮಾರಕ ದಿಂದ ಬೆಂಗಳೂರು ಫ್ರೀಡಂ ಪಾರ್ಕ್ ನವರಿಗೆ ಪಾದಯಾತ್ರೆ ಮಾಡುವದರೊಂದಿಗೆ ಫ್ರೀಡಂ ಪಾರ್ಕ್ನ ಲ್ಲಿ ದೊಡ್ಡ ಮಟ್ಟದ ಸಮಾವೇಶ ಮಾಡಿ ಪುನಃ ರಾಜ್ಯಾದ್ಯಂತ ಪ್ರತಿ ಜಿಲ್ಲೆ ಮತ್ತು ತಾಲೂಕು ಸೇರಿದಂತೆ ಹಳ್ಳಿಗಳಿಗೆ ಕ್ರಾಂತಿಕಾರಿ ರಥಯಾತ್ರೆ ಚಾಲನೆ ಇನ್ನೂ ಕೂಡ ನಿಂತಿಲ್ಲ ಈ ಮೂಲಕ ನಮ್ಮ ಎಚ್ಚರಿಕೆ ಕೊಡುತ್ತಾನೆ ಬರುತ್ತಿದ್ದೇವೆ ಆದ್ದರಿಂದ ಈಗ ಸರಕಾರ ಕಣ್ಣು ತೆರೆದಿದ್ದು ಜಾತಿ ಗಣತಿ ಮಾಡಿದ ನಂತರ ಜನ ಸಂಖ್ಯೆ ಅನುಗುಣವಾಗಿ ಒಳ ಮೀಸಲಾತಿ ಜಾರಿ ಮಾಡುವುದಾಗಿ ಸರ್ಕಾರ ನಿರ್ಧಾರ ತೆಗೆದು ಕೊಂಡಿದೆ.

ಜಾತಿ ಗಣತಿಗೆಂದು ಅಧಿಕಾರಿಗಳು ಬಂದಾಗ ಎಚ್ಚರಿಕೆಯಿಂದ ಕಾಲಂ ನಂಬರ್ 61 ರಲ್ಲಿ “ಮಾದಿಗ” ಎಂದು ನಮೂದಿಸಿ ಎಂದು ಮುಖಂಡ ಮಂಜುನಾಥ್ ಬುರುಡಿ ಮತ್ತು ಅವರ ತಂಡ ಜಾಗೃತ ಮೂಡಿಸಿ ಕರಪತ್ರ ಹಂಚುವ ಮೂಲಕ ನಮ್ಮ ಸಮಾಜ ಇನ್ನೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದೇವೆ ರಾಜಕೀಯ ಸ್ಥಾನಮಾನ ದಿಂದ ವಂಚಿತರಾಗಿದ್ದೇವೆ. ಸರಕಾರಿ ಹುದ್ದೆಯಲ್ಲಿ ಕೂಡ ಹಿಂದುಳಿದಿದ್ದೇವೆ ಎಲ್ಲಾ ಹಕ್ಕುಗಳು ಪಡೆಯ ಬೇಕಾದರೆ ಕಡ್ಡಾಯವಾಗಿ ನಿಮ್ಮ ಮನೆಗೆ ಅಧಿಕಾರಿಗಳು ಬಂದಾಗ ಕರ್ನಾಟಕ ಆದಿ ಆಂಧ್ರ ಆಗಿ ದ್ರಾವಿಡ್ ಹರಿಜನ ಎಸ್ಸಿ ಮಾತಂಗ ಎಂದು ಬರೆಸ ಬಾರದು ನಾನು “ಮಾದಿಗ’ ಎಂದು ನಿರ್ಭಯವಾಗಿ ಬರೆಯಿಸಿ ನಮ್ಮ ನ್ಯಾಯಯುತವಾದ ಹಕ್ಕನ್ನು ಪಡೆಯೋಣ ಎಂದು ಸಮಾಜಕ್ಕೆ ಸಂದೇಶ ಕೊಟ್ಟರು ಇದೆ ಸಂದರ್ಭದಲ್ಲಿ ಬಸವರಾಜ ಕಡಿಬಿನ, ಮಂಜುನಾಥ ಬುರಡಿ, ರವಿ ಮಾದರ, ಮಾರುತಿ ಹಾದಮನಿ, ರಮೇಶ ಕಡಿಬಿನ, ಕುಮಾರ ಸಣ್ಣಕ್ಕಿ, ಯಲ್ಲಪ್ಪ ಹಿರೇಮನಿ, ಅಯ್ಯಪ್ಪ ದಂಡಿನ, ಹನಮಂತ ಮಾದರ, ಶರಣು ದೊಡ್ಡಮನಿ, ಇನ್ನೂ ಅನೇಕರು ಉಪಸ್ಥಿತರಿದ್ದರು.

ವರದಿ:ಅಂದಪ್ಪ ಮಾದರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button