ಇಷ್ಟೊಂದು ಪಂಚಮಸಾಲಿ ಸಮಾಜದ ಹೃದಯ ಗೆದ್ದ ಯಶವಂತರಾಯಗೌಡರು :- ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕ ಶಿವಾನಂದ ಪಾಟೀಲ ….
ಇಂಡಿ (ಮೇ.2) :
ಇಂಡಿ ಇಲ್ಲಿ ಬಂದಾಗ ಗೊತ್ತಾಯಿತು ಪಂಚಮಸಾಲಿ ಸಾಮಾಜದ ಸಭೆ ಎಂದು ನೀವೂ ಇಷ್ಟೊಂದು ಪ್ರಮಾಣದಲ್ಲಿ ಸೇರಿರುವುದು ನೋಡಿದರೆ ಯಶವಂತರಾಯಗೌಡರು ಇಷ್ಟೊಂದು ಪಂಚಮಸಾಲಿ ಸಮಾಜದ ಜನರ ಹೃದಯ ಗೆದ್ದಿದ್ದಾರೆ ಎಂದು ಬಹಳ ಸಂತೋಷವಾಯಿತು. ನಾನು ಪಂಚಮಸಾಲಿ ಸಮಾಜದವನಿದ್ದರು ಇಷ್ಟೊಂದು ಪ್ರಮಾಣದಲ್ಲಿ ನಮ್ಮ ಸಮಾಜದ ಬೆಂಬಲ ನನಗೆ ಸಿಕ್ಕಿಲ. ಆದರೆ ನನಗೆ ಎಲ್ಲ ಸಮುದಾಯಗಳ ಜನರ ಬೆಂಬಲ ಸಿಕ್ಕಿದೆ. ಆದರೆ ಒಂದೇ ಸಮಾಜದಿಂದ ಯಾರು ಗೆಲ್ಲಲು ಸಾಧ್ಯವಿಲ್ಲ. ಎಲ್ಲ ಸಮುದಾಯಗಳ ಬೆಂಬಲ ಬೇಕು. ಅಂದಾಗ ಮಾತ್ರ ಗೆಲ್ಲಲು ಸಾಧ್ಯ ಹಾಗಾಗಿ ಯಶವಂತರಾಯಗೌಡರ ಗೆಲುವು ಖಚಿತ ಎಂದು ಮಾಜಿ ಸಚಿವ ಬಸವನಬಾಗೆವಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕ ಶಿವಾನಂದ ಪಾಟೀಲ ಹೇಳಿದರು.

ಅವರು ಇಂಡಿ ವಿಧಾನಸಭಾ ಮತಕ್ಷೇತ್ರದ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಕಾಂಗ್ರೇಸ್ ಬೆಂಬಲಿತ ಪಂಚಮಸಾಲಿ ಸಮಾಜದ ಸಮಾವೇಶದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇಂದು ಬಹಳ. ಸಂತೊಷದ ಸಂಗತಿ ಎಂದರೆ ರಾಜ್ಯದಲ್ಲಿ ಬದಲಾವಣೆಯನ್ನು ಜನ ಬಯಸಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ದ. ಯಶವಂತರಾಯಗೌಡರು ಈ ಭಾಗದ ಸರ್ವಾಂಗಗೀಣ ಅಭಿವೃದ್ದಿಯತ್ತ ಕೊಂಡೊಯ್ದಿದ್ದಾರೆ ಇದರಲ್ಲಿ ಎರಡು ಮಾತಿಲ್ಲ. ಸರಳ ಸಜ್ಜನಿಕೆ ರಾಜಕಾರಣಿಗಳಲ್ಲಿ ಇಂಡಿ ಶಾಸಕರು ಒಬ್ಬರಾಗಿದ್ದು ಅಂತಹ ವ್ಯಕ್ತಿತ್ವ ಉಳ್ಳ ಅವರನ್ನು ನಮ್ಮ ಸಮುದಾಯ ಅವರ ಬೆಂಬಲಕ್ಕೆ ನಿಂತಿರುವುದು ಸ್ವಾಗತಾರ್ಹ. ಯಶವಂತರಾಯಗೌಡ ಅವರಿಗೆ ಅತ್ಯಧಿಕ ಮತಗಳ ಅಂತರದಿಂದ ಗೆಲುವಿಗೆ ಶ್ರಮಿಸಬೇಕು ಎಂದರು.ಇಂಡಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ ಹೃದಯವಂತರ ತಾಲೂಕು ಯಾವುದಾದರು ಇದ್ದರೆ ಅದು ಇಂಡಿ ಎಂದು ಎದೆ ತಟ್ಟಿ ಹೇಳಬೇಕು. ಅಂತಹ ಜನ ನಮ್ಮದು ಇಲ್ಲಿ ಯಾವುದೇ ಜಾತಿ ಜನಾಂಗಕ್ಕೆ ಎಂದು ಸಿಮೀತವಾದವರಲ್ಲ ಇಲ್ಲಿ ಏನಿದ್ದರು ಅಭಿವೃದ್ದಿ ಪರವಾಗಿದ್ದು ನೀತಿ, ಸೈದ್ದಾಂತತಿಕ ನಿಲುವಿನ ಮೇಲೆ ರಾಜಕಾರಣ ಜರುಗುತ್ತದೆ. ಅಂತಹ ಹೃದಯ ವೈಶಾಲತೆ ಉಳ್ಳ ಜನ ನಮ್ಮವರು ಎಂದರು.ಇವತ್ತು ಇಡಿ ಮಪಂಚಮಸಾಲಿ ಸಮಾಜ ನನಗೆ ಬೆಂಬಲಕ್ಕೆ ನೀತಿದ್ದು ಅವರ ಹೃದಯ ಶ್ರೀಮಂತಿಕೆ ಅವರ ಉಪಕಾರ ಸ್ಮರಣೆ ಎಂದು ಮರೆಯಲು ಸಾಧ್ಯವಿಲ್ಲ. ಕಷ್ಟ ಕಾಲದಲ್ಲಿ ನಮಗೆ ಸಹಾಯ ಮಾಡಿದ ಎಲ್ಲ ಹೃದಯವಂತರನ್ನು ಸದಾ ಮುಂದುವರಿಸುವ ಮೂಲಕ ಅವರಿಗೆ ಸದಾ ಋಣಿಯಾಗಿರುತ್ತೆನೆ. ನನ್ನ ರಾಜಕಾರಣ ಬಿ.ಕೆ.ಗುಡದಿನ್ನಿಯವರನ್ನು ಸ್ಮರಿಸಬೇಕಾಗುತ್ತದೆ ನನಗೆ ರಾಜಕೀಯ ಜೀವನ ನೀಡಿದವರು. ಅವರು ನನಗೆ ಜಿಲ್ಲಾಪಂಚಾಯತಿ, ಟಿಕೆಟ ನೀಡುವ ಮೂಲಕ ರಾಜಕಾರಣಕ್ಕೆ ಪ್ರವೇಶ ಮಾಡಲು ಸಾಧ್ಯವಾಯಿತು ಎಂದರು. ಮಹಾಜನತೆ ಹೊಸ ವಿಧಲ್ಲಿ ರಾಜಕೀಯ ಅವಕಾಶ ನೀಡಿ ರಾಜಕಾರಣ ಪ್ರೀತಿ ವಿಶ್ವಾಸದಿಂದ ಗೆದ್ದವನು. ನಾನು ಎಂದು ದ್ವೇಶದ ರಾಜಕಾರಣ ಮಾಡಿದವನಲ್ಲ ಅದಕ್ಕಾಗಿ ಇಂದು ಪ್ರತಿ ಗ್ರಾಮಗಳಲ್ಲಿ ಎಲ್ಲವನ್ನು ಮಿರಿ ಜನ ಸನಾಮಿ ರೀತಿಯಲ್ಲಿ ಹರಿದು ಬರುತ್ತಿದೆ. ಇದಕ್ಕೆ ಅಣ್ಣ ಬಸವಣ್ಣವರ ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ಸಾಗುತ್ತಿದ್ದೆನೆ. ನನ್ನ ಉಸಿರು ಇರುವರೆಗೆ ನನ್ನ ತಾಲೂಕಿನ ಜನರನ್ನು ಯಾವತ್ತು ಮರೆಯುವುದಿಲ್ಲ ಮುಂದೆ ಕೂಡಾ ಮರೆಯವುದಿಲ್ಲ ಎಂದರು. ಬರುವ ಮೇ.೧೦ ರಂದು ಜರುಗುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ನನಗೆ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ವಿಂತಿಸಿದರು.ಈ ಸಂದರ್ಭದಲ್ಲಿ ಸಿಂದಗಿ ಕಾಂಗ್ರೇಸ್ ಅಭ್ಯರ್ಥಿ ಅಶೋಕ ಮನಗೂಳಿ, ಕೆಪಿಸಿಸಿ ಕಾರ್ಯದರ್ಶಿ ಸಂಮೇಶ ಬಬಲೇಶ್ವರ ಮಾತನಾಡಿದರು.ಭದ್ರಯ್ಯಸ್ವಾಮಿಜಿ ಚಿಕ್ಕಪಟ್ಟ ಸಾನಿಧ್ಯವಹಿಸಿದ್ದಾರೆ, ಬಿ.ಡಿ.ಪಾಟೀಲ ಭಂತನಾಳ, ಎಮ್.ಆರ್.ಪಾಟೀಲ, ಆನಂದಪ್ಪ ದೇಶಸಾಯಿ, ಅಣ್ಣಪ್ಪ ಬಿದರಕೊಟಿ, ಜೀತಪ್ಪ ಕಲ್ಯಾಣಿ, ಮಂಜುನಾಥ ಕಾಮಗೊಂಡ, ರುದ್ರೇಶ ಅಲಗೊಂಡ, ಶಿವಯೋಗೆಪ್ಪ ಮಲ್ಲಪ್ಪ ನೆದಲಗಿ, ಪಾಪು ಕಿತ್ತಲಿ. ಗಡ್ಡೆಪ್ಪ ಜೊತೆಗೊಂಡ ಸೇರಿದಂತೆ ಅನೇಕರು ಇದ್ದರು.
ಜಿಲ್ಲಾ ವರದಿಗಾರರು: ಬೀ.ಎಸ್.ಹೊಸೂರ್.ವಿಜಯಪುರ