ಜಾತಿ ಮತಗಳನ್ನು ಮೀರಿ ನಿಂತ ಸಮತಾ ಮೂರ್ತಿ ಶ್ರೀಮಾತೆ ಶಾರದಾದೇವಿ – ಶ್ರೀಮತಿ ಯಶೋಧಾ.ಪ್ರಕಾಶ್.
ಚಳ್ಳಕೆರೆ ಮೇ.10

ಶ್ರೀಮಾತೆ ಶಾರದಾದೇವಿಯವರು ಜಾತಿ ಮತಗಳನ್ನು ಮೀರಿ ನಿಂತ ಸಮತಾ ಮೂರ್ತಿಯಾಗಿದ್ದರು ಎಂದು ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ತಿಳಿಸಿದರು. ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥವನ್ನು ಪಾರಾಯಣ ಮಾಡುತ್ತ ಅವರು ಶಾರದಾದೇವಿಯವರ ಬಗ್ಗೆ ಮಾತನಾಡಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿ ಸ್ತುತಿ ಪಠಣ, ಮಕ್ಕಳಿಂದ ಭಜನೆ ಮತ್ತು ಶ್ರೀಮದ್ ಭಗವದ್ಗೀತೆಯ ಧ್ಯಾನ ಶ್ಲೋಕಗಳ ಪಠಣ ಕಥೆಗಳಿಂದ ಕಲಿಯೋಣ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.

ಈ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಭ್ರಮರಂಭಾ, ವಿನೋದ ಬಸವರಾಜ್, ಶಾಂತಮ್ಮ ಶಾಂತವೀರಪ್ಪ, ನಾಗರತ್ನಮ್ಮ, ಸೌಮ್ಯ ಪ್ರಸಾದ್, ಯತೀಶ್ ಎಂ ಸಿದ್ದಾಪುರ,ಶೈಲಜ ಶ್ರೀನಿವಾಸ್, ಕೃಷ್ಣವೇಣಿ ವೆಂಕಟೇಶ್, ದ್ರಾಕ್ಷಾಯಣಿ ವಿಜಯೇಂದ್ರ, ವೀರಮ್ಮ ಬಸವರಾಜ, ಜಯಶೀಲಮ್ಮ, ವಿಜಯಲಕ್ಷ್ಮಿ ರಾಮರೆಡ್ಡಿ ,ಹರ್ಷಿತಾ, ವಿನತಿ, ಧ್ರುವ, ನಿಖಿಲೇಶ್ ಯಾದವ್,ದವನ್, ಯಶಸ್ಸು,ಮೋಕ್ಷಿತ್, ಕಾರ್ತಿಕ್,ವರುಣ್ ಇದ್ದರು.
ವರದಿ:ಯತೀಶ್.ಎಂ ಸಿದ್ದಾಪುರ,ಚಳ್ಳಕೆರೆ.