ಡೆಂಗ್ಯೂ ರೋಗ ಮಾರಕ ತಡೆಗೆ – ಎಲ್ಲರೂ ಸಹಕರಿಸಿ.
ಬಾಗಲಕೋಟೆ ಆ.06

ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ ಉಪ ಕೇಂದ್ರ ಬೆನಕಟ್ಟಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ಮುಂಜಾಗ್ರತೆ ಆರೋಗ್ಯ ಅರಿವು ಜಾಗೃತಿ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್ ಎಸ್ ಅಂಗಡಿಯವರು, ವೈಯಕ್ತಿಕ ಸ್ವಚ್ಛತೆ ಆದ್ಯತೆ ನೀಡಿ, ಪರಿಸರ ಸ್ವಚ್ಛತೆ ಕಾಪಾಡಿ ಕೊಳ್ಳಬೇಕು, ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಗೆ ಗ್ರಾಮದ ಮುಖಂಡರು ಯುವಕರು ಕೈಜೋಡಿಸಿ. ಮಳೆಗಾಲ ಪ್ರಾರಂಭ ವಾದ್ದರಿಂದ ನಮ್ಮ ಮನೆ ಸುತ್ತ ಅನುಪಯುಕ್ತ ವಸ್ತು ಕಸ ವಿಲೇವಾರಿ ಮಾಡಬೇಕು. ಡೆಂಗ್ಯೂ ರೋಗಕ್ಕೆ ಈಡೀಜ್ ಇಜಿಪ್ತೆ ಸೊಳ್ಳೆ ಕಾರಣ ಡೆಂಗ್ಯೂ ಚಿಕೂನ್ ಗುನ್ಯಾ ವೈರಾಣು ರೋಗವಾಗಿದ್ದು. ರೋಗನಿದಾನ ಚಿಕಿತ್ಸೆ ಇರುವುದಿಲ್ಲ ರೋಗ ಲಕ್ಷಣಗಳ ಆಧಾರದ ಮೇಲೆ ತಜ್ಞ ವೈದ್ಯರು ಚಿಕಿತ್ಸೆ ಔಷಧೋಪಚಾರ ಮಾಡುವರು, ಈಡೀಜ್ ಇಜಿಪ್ತೆ ಸೊಳ್ಳೆ ಸಂತಾನೋತ್ಪತ್ತಿಗೆ ಸ್ವಚ್ಛ ನೀರಿನಲ್ಲಿ ತತ್ತಿ ಇಟ್ಟು ಲಾರ್ವಾ ಉತ್ಪತ್ತಿ ಮಾಡುತ್ತದೆ. ಹಗಲಿನಲ್ಲಿ ಸೊಳ್ಳೆಗಳು ಕಚ್ಚುವಿಕೆಯಿಂದ ಡೇಂಗ್ಯು ಚಿಕೂನ್ ಒಬ್ಬರಿಂದ ಒಬ್ಬರಿಗೆ ಸಾಂಕ್ರಾಮಿಕವಾಗಿ ಹರಡುವುದು. ತೀವ್ರ ಜ್ವರ ನಿಶ್ಯಕ್ತಿ ಮೈಮೇಲೆ ಗಂಧೆಗಳು ಕಾಣಿಸಿದರೇ ನೀರ್ಲಕ್ಷ್ಯ ಮಾಡಬೇಡಿ ಸಮೀಪದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿರಿ ಪರೀಕ್ಷೆ ಚಿಕಿತ್ಸೆ ಉಚಿತ ವಾಗಿರುತ್ತದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಮನೆ ಮನೆ ಭೇಟಿ ನೀಡಿ ಸೊಳ್ಳೆ ಉತ್ಪತ್ತಿ ತಾಣಗಳ ಸಮೀಕ್ಷೆ ನಡೆಸಿ ಲಾರ್ವಾ ಉತ್ಪತ್ತಿ ತಾಣಗಳಾದ ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು ಒಡೆದ ಬಾಟಲ್ ಟೈರ್ ಟ್ಯೂಬ್ ಟೆಂಗಿನ ಚಿಪ್ಪು ಕಸ ವಿಲೇವಾರಿ ಮಾಡಬೇಕು ಸೊಳ್ಳೆ ಪರದೆ ನಿರೋಧಕ ಬಳಸಬೇಕು ಮೈತುಂಬ ಬಟ್ಟೆ ಧರಿಸಬೇಕು. ಹಾಗೂ ಸಂಶಯುತ ಮಲೇರಿಯಾ ರಕ್ತ ಲೇಪನ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಅರಿವು ಜಾಗೃತಿ ಕಾರ್ಯದಲ್ಲಿ ಆರೋಗ್ಯ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಗ್ರಾಮದ ಮುಖಂಡರು ಯುವಕರು ಭಾಗವಹಿಸಿದ್ದರು.