ನಿಗಧಿತ ಸಮಯಕ್ಕೆ ಬಾರದಿರುವುದರಿಂದ – ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಬಸ್ ತಡೆದು ಬೃಹತ್ ಪ್ರತಿಭಟನೆ.

ಹುನಗುಂದ ಡಿಸೆಂಬರ್.8

ತಾಲೂಕಿನ ನಾಗೂರು ಗ್ರಾಮಕ್ಕೆ ನಿಗಧಿತ ಸಮಯಕ್ಕೆ ಬಸ್ ಬಾರದ್ದರಿಂದ ಆಕ್ರೋಶ ಗೊಂಡ ವಿದ್ಯಾರ್ಥಿಗಳು ಗ್ರಾಮಸ್ಥರೊಂದಿಗೆ ಸೇರಿಕೊಂಡು ಬಸ್ ತಡೆದು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.ಗುಡೂರು ಮಾರ್ಗದಿಂದ ಹುನಗುಂದ ಪಟ್ಟಣಕ್ಕೆ  ಬೆಳಿಗ್ಗೆ ಶಾಲಾ ಕಾಲೇಜುಗಳಿಗೆ ಹಾಗೂ ಇನ್ನೀತರ ಕೆಲಸ ಕಾರ್ಯಗಳಿಗೆ ಹೋಗಲು ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ. ಈ ಹಿನ್ನಲೆಯಲ್ಲಿ ನಿಗದಿತ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ಪರದಾಡುವಂತಾಗಿದೆ.ಈ ಮಾರ್ಗದಲ್ಲಿ ಕುಷ್ಟಗಿ ತಾಲೂಕಿನ ಹುಚನೂರು,ಯರಿಗೋನಾಳ,ಪುರತಗೇರಿ, ಅಂಟರಠಾಣ ಹಾಗೂ ಹುನಗುಂದ ಮತ್ತು ಇಳಕಲ್ ತಾಲೂಕಿನ ಗುಡೂರು, ಇಲಾಳ, ಮುರುಡಿ, ಗಾಣದಾಳ, ಇಲಾಳ, ನಾಗೂರು, ಯಡಹಳ್ಳಿ, ಬನ್ನಹಟ್ಟಿ, ಹಿರೇಬಾದವಾಡಗಿ ಸೇರಿದಂತೆ ೧೫.ಕ್ಕೂ ಹೆಚ್ಚು ಗ್ರಾಮಗಳ ೧೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಮಾರ್ಗವನ್ನು ಅವಲಂಭಿಸಿದ್ದು, ಪ್ರತಿ ನಿತ್ಯ ಬಸ್ ಗಾಗಿ ಪರದಾಡುವುದು ತಪ್ಪಿಲ್ಲ. ಜೊತಗೆ ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜಗಳಿಗೆ ತೆರಳಿ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಕಾಲೇಜು ವಿದ್ಯಾರ್ಥಿನಿಯೊಬ್ಬರು ಪತ್ರಿಕೆಯೊಂದಿಗೆ ತಮ್ಮ ನೋವು ತೋಡಿಕೊಂಡರು.ಸರಿಸುಮಾರು ೨-೩ ಗಂಟೆಗಳ ಕಾಲ ಬಸ್ ತಡೆದಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು. ವಿಷಯ ತಿಳಿದು ಹುನಗುಂದ ಬಸ್ ಘಟಕದ ವ್ಯವಸ್ಥಾಪಕ ಎಸ್. ಆರ್. ಸೊನ್ನದ ಘಟನಾ ಭೇಟಿ ನೀಡಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರೊಂದಿಗೆ ಮಾತನಾಡಿ ಮುಂಬರುವ ದಿನಗಳಲ್ಲಿ ಬಸ್ ಸಮಸ್ಯೆಯಾಗದಂತೆ ನೋಡಿ ಕೊಳ್ಳಲಾಗುವುದು ಎಂದು ಭರವಸೆ ನೀಡಿದರು.ಶಾಲಾ ಕಾಲೇಜುಗಳಿಗೆ ತರೆಳಲು ಸಮಯ ಮೀರಿದ್ದರಿಂದ ಕೆಲವು ವಿದ್ಯಾರ್ಥಿಗಳು ಪಟ್ಟಣದ ಬಸ್ ಘಟಕದ ಮುಂದೆ ಜಮಾಯಿಸಿ ಅಧಿಕಾರಿಗಳ ಮುಂದೆ ವಾಗ್ವಾದಕ್ಕಿಳಿದರು.ಚಾಲಕ ಮತ್ತು ನಿರ್ವಾಹಕರು ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಮುಂದಾದರೂ ವಿದ್ಯಾರ್ಥಿಗಳ ಕೋಪ ಕಡಿಮೆಯಾಗಲಿಲ್ಲ. ಬಹುತೇಕ ವಿದ್ಯಾರ್ಥಿಗಳು ಶಾಲೆಗೆ ಗೈರಾಗಿ ಮರಳಿ ತಮ್ಮ ಊರಿಗೆ ಹೋದರು.ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಾಂತೇಶ ಮುರುಡಿ,  ಗುಂಡನಗೌಡ ಪರತಗೌಡ್ರು, ಶರಣಪ್ಪ ಹೂಲಗೇರಿ, ಮಾಂತೇಶ ಮಾದರ ಭಾಗವಹಿಸಿದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button