ಕಾನಾ ಹೊಸಹಳ್ಳಿ ವೈಭವ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ.

ಕಾನಾ ಹೊಸಹಳ್ಳಿ ಮಾರ್ಚ್.6

ಭಾರತ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಪ್ರತಿಯೊಂದು ಮಗುವಿನಲ್ಲಿಯೂ ಒಬ್ಬ ವಿಜ್ಞಾನಿ ಇದ್ದಾನೆ ಎಂದು ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಮುರುಳೀಧರ ಗಜೇಂದ್ರಗಡ ಹೇಳಿದರು. ಇಲ್ಲಿನ ವೈಭವ ಶಾಲೆ ಆವರಣದಲ್ಲಿ ಕಾಳಿದಾಸ ಹಾಗೂ ಧೃತಿ ವಿದ್ಯಾವರ್ಧಕ ಸಂಘದಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೂಲ ವಿಜ್ಞಾನಿ ಭಾರತೀಯರ ಜೀವನದ ಒಂದು ಭಾಗವಾಗಿದ್ದು, ಎಲ್ಲವನ್ನೂ ತಿಳಿದುಕೊಳ್ಳುವ ಆಸಕ್ತಿ ಮಕ್ಕಳಲ್ಲಿ ಬೆಳೆಸಬೇಕಾಗಿದೆ. ಜೀವನದಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆಗೂ ವೈಜ್ಞಾನಿಕ ಕಾರಣಗಳಿರುತ್ತವೆ. ವಿಜ್ಞಾನದ ಮೂಲ ಪ್ರಕ್ರಿಯೆ ಆಧಾರದಲ್ಲಿ ಎಲ್ಲ ಕ್ರಿಯೆಗಳು ಜರುಗುತ್ತವೆ ಎಂದು ಅವರು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ವತ್ಸಲ ಅವರು ಅಧ್ಯಕ್ಷತೆ ವಹಿಸಿದ್ದರು.

ವಿಜ್ಞಾನ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಪ್ರಯೋಗಗಳು ನಡೆದವು. ಸಂಜೆ ವೈಭವ ಆಂಗ್ಲ ಮಾಧ್ಯಮ ಪ್ರಾಥಮಿಕ ಮಕ್ಕಳಿಂದ ಕಲ್ಚರಲ್ ಫೆಸ್ಟ್ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಸವಿತ ಮುರುಳಿಧರ್ ಕಾರ್ಯದರ್ಶಿ ವೈಭವ ಶಾಲೆ ಮುಖ್ಯ ಅತಿಥಿಗಳು, ಶಶಿಧರ್ ಗಜೇಂದ್ರಗಡ ಬಿನ್ಯಾಸ್ ಕಂಪನಿ ಅಭಿಯಂತರರು, ಜಾತಪ್ಪ ಇಂದು ಕಾಲೇಜ್ ಪ್ರಾಚಾರ್ಯರು, ಧ್ರುವ ಕುಮಾರ್ ವಿಜ್ಞಾನ ವಿಭಾಗದ ಮುಖ್ಯಸ್ಥರು, ಪ್ರಕಾಶ್ ಗೌಡ, ಮಲ್ಲೇಶ್ ಎಚ್, ರಮೇಶ್ ಗೌಡ ಜಿ ವಿ, ವಲಯ ಶಿಕ್ಷಣ ಸಂಯೋಜಕರಾದ ಜಿಲಾನ್, ಸಿಆರ್ಪಿ ಎನ್.ಎಸ್ ಲೊಕೇಶ್, ಸಿಆರ್ಪಿ ಜಿ ಸಿದ್ದೇಶ್ವರ ಇದ್ದರು‌. ಈ ವೇಳೆ ನಿರೂಪಣೆ ಆರ್ ಜಿ ನಂದೀಶ್ ಗೌಡ, ಪ್ರಾರ್ಥನೆ ಪ್ರೀತಿ, ಸ್ವಾಗತ ಮಮತಾ ನೇರವೇರಿಸಿದರು, ವಂದನಾರ್ಪಣೆ ಹೇಮಂತ್ ಕುಮಾರ್ ಗಣಿತ ಶಿಕ್ಷಕರು ನೆರವೇರಿಸಿದರು. ಹಾಗೂ ಕಾಳಿದಾಸ ವೈಭವ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು, ಇಂದು ಕಾಲೇಜಿನ ವಿಜ್ಞಾನ ವಿಭಾಗದ ಉಪನ್ಯಾಸಕರು, ಪೋಷಕರು ವಿದ್ಯಾರ್ಥಿಗಳು ಇದ್ದರು.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button