ಹತ್ತು ವರ್ಷಗಳ ಅವಧಿಯಲ್ಲಿ ಭೀಮಾತೀರ ಅಭಿವೃದ್ದಿಯಿಂದ ವಂಚಿತ :-ರವಿಕಾಂತ ಪಾಟೀಲ…

ಅಗರಖೇಡ (ಮೇ.5) :

ಇಂಡಿ ಅಗರಖೇಡ ಗ್ರಾಮದ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಭಾಗವಹಿಸಿ ಮಾಜಿ ಶಾಸಕರಾದ ರವಿಕಾಂತ ಪಾಟೀಲ ಮಾತನಾಡಿ ಸುಮಾರು ಹತ್ತು ವರ್ಷಗಳ ಅವಧಿಯಲ್ಲಿ ಭೀಮಾ ತೀರ ಅಭಿವೃದ್ಧಿಯಿಂದ ವಂಚಿತವಾಗಿದೆ, ರಸ್ತೆ, ಗುಣಮಟ್ಟದ ಶಿಕ್ಷಣ ಸುಸಜ್ಜಿತ ಆಸ್ಪತ್ರೆ, ಹಾಗೂ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ ಎಂದು ಮಾತನಾಡಿದರು.

ಅಭ್ಯರ್ಥಿ.ಬಿ. ಡಿ ಪಾಟೀಲರು ಮಾತನಾಡಿ ಭೀಮಾ ತೀರದ ಬಹುತೇಕ ಗ್ರಾಮಗಳಲ್ಲಿ ಪ್ರವಾಹದ ಕಾಲದಲ್ಲಿ ಹಲವಾರು ಸಮಸ್ಯೆಗಳು ಇದ್ದು,ನಾನು ಕಣ್ಣಾರೆ ಕಂಡಿದ್ದೇನೆ ನಿಮ್ಮ ಆರ್ಶಿವಾದ ದಿಂದ ಶಾಸಕನಾದರೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಮಾತನಾಡಿದರು.ನೀಲಕಂಠ,ಸಾವಳಗಿ,ನಾಗೇಶ ತಳಕೇರಿ, ಶ್ರೀಶೈಲಗೌಡ ಪಾಟೀಲ, ಅಯೂಬ್ ನಾಟೀಕರ ಡಾ ರಮೇಶ ರಾಠೋಡ ಮಾತನಾಡಿದರು.ವೇದಿಕೆ ಮೇಲೆ ಶಿವಾನಂದಗೌಡ ಪಾಟೀಲ, ಸದ್ದಾಂ ಅರಬ್, ಶಿವುಕುಮಾರ ಅಂದೇವಾಡಿ, ಸಿದ್ದು ಡಂಗಾ, ಕಾಶಿನಾಥ್ ಮಾನೆ, ರವಿ ಕ್ಷೇತ್ರಿ,ಕಾಮಾ ಕ್ಷೇತ್ರಿ,ನಂದಾ ಗುನ್ನಾಪೂರ,ಸುರೇಶ ಡಿ ಕೆ,ಶಿವಾಜಿ ರಾಠೋಡ, ತುಕಾರಾಮ ತಾಂಬೆ, ಅಶೋಕ ಖಂಡೇಕರ, ಸುದರ್ಶನ್ ಕ್ಷೇತ್ರಿ, ನಿಯಾಝ್ ಅಗರಖೇಡ ರಾಜು ಮುಲ್ಲಾ ಮುಂತಾದ ನಾಯಕರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು : ಬೀ.ಎಸ್.ಹೊಸೂರ್.ವಿಜಯಪುರ ….

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button