ಮೊಳಕಾಲ್ಮೂರು ಕ್ಷೇತ್ರದ ಎನ್.ವೈ.ಗೋಪಾಲಕೃಷ್ಣ ಶಾಸಕರು ಬಡವರ ಪಾಲಿಗೆ ದೇವರೆಂದು ನಂಬಲಾಗುತ್ತದೆ.

ಮೊಳಕಾಲ್ಮೂರು ಮೇ.25

ಚಿತ್ರದುರ್ಗ ಜಿಲ್ಲೆ, ಮೊಳಕಾಲ್ಮೂರು ತಾಲೂಕಿನ ಕಾಂಗ್ರೆಸ್ ಪಕ್ಷದಿಂದ ನೂತನ ಶಾಸಕರಾಗಿ ತಮ್ಮ ರಾಜಕೀಯ ರಂಗದಲ್ಲಿ ಏಳನೇ ಬಾರಿಯಾಗಿ ಗೆದ್ದಿರುವಂತಹ ಹಿರಿಯ ಮುತ್ಸದ್ದಿ ರಾಜಕಾರಣಿಗಳು ಎನ್. ವೈ. ಗೋಪಾಲಕೃಷ್ಣ ಇವರು ನುಡಿದಂತೆ ನಡೆಯುವ ರಾಜಕಾರಣಿ ಹಾಗೂ ದೀನ ದಲಿತರ ಬಡವರ ಹಿತ ಬಯಸುವಂತಹ ಹೃದಯಶೀಲ ಶಾಸಕರು ಹಾಗೂ ನಂಬಿದ ಜನಗಳಿಗೆ ಸುಳ್ಳು ಆಶ್ವಾಸನೆ ನೀಡದೆ ಸರ್ಕಾರದ ಸವಲತ್ತುಗಳನ್ನು ತಮ್ಮ ಕ್ಷೇತ್ರದ ಅಭಿವೃದ್ಧಿಯ ಹಿತವನ್ನು ಬಯಸುವಂತಹ ವಿಶೇಷವಾದಂತಹ ರಾಜಕಾರಣಿ ಎಂಬ ಮಾತನ್ನು ಜನರ ನುಡಿಯುವಂತಹ ಮಾತುಗಳಾಗಿವೆ ಹಾಗೆ ಅಧಿಕಾರ ವರ್ಗದವರು ಸಹ ಹೆಚ್ಚಾಗಿ ಗೌರವಿಸುವಂತಹ ಹಾಗೂ ಅವರಿಂದ ಕೆಲವಾರು ಅಧಿಕಾರಿಗಳು ಇವರಿಂದ ಕೆಲಸಗಳನ್ನು ಸಹ ಕಲಿತಿದ್ದೇವೆ ಎನ್ನುವ ಮಾತು ಸಹ ಕೇಳಿಬರುತ್ತಿದೆ.

ಎನ್. ವೈ. ಗೋಪಾಲಕೃಷ್ಣ ಶಾಸಕರನ್ನು ಕೆಲ ಅಭಿಮಾನಿಗಳು ಹೇಳುತ್ತಾರೆ ಇವರನ್ನು ಇವರ ತಂದೆ ತಾಯಿಗಳು ಸಹ ಅರ್ಥ ಮಾಡಿಕೊಳ್ಳಲು ಕಷ್ಟ ಅನಿಸುತ್ತದೆ, ಆದರೆ ಇವರನ್ನು ಕೆಲ ಅಭಿಮಾನಿಗಳು ಅರ್ಥ ಕೊಂಡಿರುವರು ಹೇಳುತ್ತಾರೆ, ಇಂಥ ಶಾಸಕರು ನಮ್ಮ ತಾಲೂಕಿಗೆ ಸಿಕ್ಕಿರು ವುದೇ ನಮ್ಮ ಪುಣ್ಯ ಎಂದು ಅಭಿಮಾನಿಗಳು ಹೇಳುತ್ತಾರೆ. ಈ ಇಂದೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂದರ್ಭದಲ್ಲಿ 3500 ಕೋಟಿಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕೆಲಸಗಳು ಮಾಡಿ ಕೂಡ್ಲಿಗಿ ತಾಲೂಕಿಗೆ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಜನಗಳು ಹೇಳುತ್ತಾರೆ. ಅದು ಏನೇ ಇರಲಿ ಎನ್. ವೈ. ಗೋಪಾಲಕೃಷ್ಣ ಇವರು ತಿಳಿಸುವ ಹಾಗೆ ಅವರಿಗೆ ಯಾವುದೇ ಪಕ್ಷದವರು ಟಿಕೆಟ್ ಕೊಟ್ಟರೆ ಆ ಕ್ಷೇತ್ರದಲ್ಲಿ ಸಂಶಯವಿಲ್ಲದೆ ಗೆದ್ದು ಬರುವಂತಹ ವ್ಯಕ್ತಿ ಜನಗಳ ನಂಬಿಕೆಯುಳ್ಳ ರಾಜಕಾರಣಿ ಎಂಬುದು ಜಗಜ್ಜಾಯಿರಾಗಿರುವುದು ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಎಲ್ಲರಿಗೂ ತಿಳಿದಿರುವಂತಹ ವಿಷಯವಾಗಿದೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button