ಹುಲಿಕೆರೆ ಗ್ರಾಮದ ಕೆರೆಗೆ ಬಾಗಿನ ಅರ್ಪಿಸಿ ಗಂಗಾ ಪೂಜೆ ನೆರವೇರಿಸಿದ – ಶಾಸಕ ಡಾ, ಶ್ರೀ ನಿವಾಸ್ ಎನ್.ಟಿ.
ಹುಲಿಕೆರೆ ಅ.22

ಈ ಬಾರಿ ನಮ್ಮಲ್ಲಿ ಒಳ್ಳೆಯ ಮಳೆ ಯಾಗಿರುವು ದರಿಂದ ರೈತರಲ್ಲಿ ಹರ್ಷ ತಂದು ಸಮೃದ್ಧಿ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಹುಲಿಕೆರೆ ಗ್ರಾಮದ ಕೆರೆಗೆ 56 ವರ್ಷಗಳ ನಂತರ ಕೋಡಿ ಬಿದ್ದ ಸಂತಸದಲ್ಲಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ, ಶ್ರೀನಿವಾಸ್ ಎನ್.ಟಿ ಅವರು ಸ್ಥಳೀಯ ಮುಖಂಡರು, ಕಾರ್ಯಕರ್ತರು, ಜನ ಪ್ರತಿನಿಧಿಗಳು, ರೈತರು, ಮಹಿಳೆಯರೊಂದಿಗೆ ಭೇಟಿ ನೀಡಿ ಕೆರೆಗೆ ಬಾಗಿನ ಅರ್ಪಿಸಿ ಗಂಗಾ ಪೂಜೆ ನೆರವೇರಿಸಿ ಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿದರು. ಈ ಹಿಂದೆಯೇ ಶಾಸಕರು ಹುಲಿಕೆರೆ ಗ್ರಾಮದ ಕೆರೆಯ ಅಂಚಿನಲ್ಲಿ ಜಲಾವೃತ ಗೊಂಡಿರುವ ಮನೆಗಳನ್ನು ಪರಿಶೀಲಿಸಿದರು. ಕೆರೆಯ ಅಂಚಿನಲ್ಲಿರುವ ಜನರಿಗೆ ತೊಂದರೆ ಯಾಗದಂತೆ ಕ್ರಮ ವಹಿಸಲು ಸ್ಥಳೀಯ ಜನರು ಶಾಸಕರಲ್ಲಿ ಮನವಿ ಮಾಡಿ ಕೊಂಡರು.

ಎಲ್ಲರ ಮಾತುಗಳನ್ನು ಆಲಿಸಿದ ಶಾಸಕರು, ಸಣ್ಣ ನೀರಾವರಿ ಇಲಾಖೆಯ ತಜ್ಞರ ಸಲಹೆಯಂತೆ ಕೆರೆಯಿಂದಾಗಿ ಇಲ್ಲಿನ ಜನರಿಗೆ ತೊಂದರೆ ಯಾಗದಂತೆ ಕ್ರಮ ತೆಗೆದು ಕೊಳ್ಳುತ್ತೇವೆ. ಎಂಬ ಭರವಸೆ ನೀಡಿದರು. ಕೆರೆಯಿಂದ ತೊಂದರೆ ಯಾಗದಂತೆ ತಡೆಗೋಡೆ ನಿರ್ಮಿಸುತ್ತೇವೆ ಎಂದು ಹೇಳಿದರು.ಅದೇ ರೀತಿ ಕೊಟ್ಟ ಮಾತಿನಂತೆ ಗಂಗಾ ಪೂಜೆ ನೆರವೇರಿಸಿದ ನಂತರ ತಜ್ಞರನ್ನು ಕರೆಯಿಸಿ ಕೊಂಡ ಶಾಸಕರು ಮಾತುಕತೆ ಯೊಂದಿಗೆ ಸ್ಥಳೀಯ ಜನರ ಸಮಸ್ಯೆಗಳು ಏನೂ ಇವೆ. ಅವುಗಳನ್ನು ಗಮನದಲ್ಲಿಟ್ಟು ಕೊಂಡು ಬಗೆಹರಿಸುವ ಮೂಲಕ ಜನರಿಗೆ ಒಳಿತನ್ನು ಬಯಸಲು ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯರಾದ ಶಶಿಧರಸ್ವಾಮಿ, ಮಾಜಿ ತಾ.ಪಂ ಸದಸ್ಯರಾದ ಶರಣಗೌಡ, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಸೂಗಪ್ಪ, ಸಹಾಯಕ ಇಂಜಿನೀಯರಾದ ಮೇಡಮ್ ರಾಜ್, ಶ್ರೀಕಾಂತ, ಹಿರೇ ಕುಂಬಳಕುಂಟೆ ಗ್ರಾ. ಪಂ. ಅಧ್ಯಕ್ಷರಾದ ಗಂಗಮ್ಮ ಕರಿಬಸಪ್ಪ, ಗ್ರಾ.ಪಂ ಸದಸ್ಯರಾದ ದುರಗಪ್ಪ, ಮುಖಂಡರಾದ ಕೆ.ಇ.ಬಿ ಮಾರಪ್ಪ, ಡಾ, ಒಂಕಾರಪ್ಪ, ಹರೀಶ್, ಮಾರಪ್ಪ, ಚೆನ್ನಬಸಪ್ಪ, ಬಸವರಾಜ, ನವೀನ್, ಗಾಳೇಪ್ಪ, ಧನಂಜಯ್, ಶಿವಣ್ಣ, ಕುಬೇರಪ್ಪ ಮೇಷ್ಟ್ರು, ಗಾದ್ರೆಪ್ಪ, ಊರಿನ ಹಿರಿಯರು, ಗ್ರಾಮಸ್ಥರು, ರೈತರು, ಮಹಿಳೆಯರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ