“ನ್ಯಾಯ ನೀತಿ ಧರ್ಮ ಪಾಲನೆ ಜಗದ ಮಹಾನ್ ಆಸ್ತಿಯು”…..

ಅಂದಕಿಂತ ಆನಂದ ಮುಖ್ಯವು ಮಾತಿಗಿಂತ
ಮೌನ ಶ್ರೇಷ್ಠವು
ರುಚಿಸದ ಆಹಾರ ಸೇವಿಸುವದಕಿಂತ
ಉಪವಾಸ ಲೇಸವು
ದುರಾಸೆಗಿಂತ ನಿರಾಸೆ ಉತ್ತಮವು
ಕೇಳದಿರುವವನಿಗೆ ಹೇಳದಿರುವುದೇ
ಸುಗುಣವು
ಯಾರಾರನ್ನು ನಗಿಸದಿರು ಮಕ್ಕಳ ನಗು
ನೋಡುವುದೇ ಸೌಭಾಗ್ಯವು
ಅನುಭವ ಇದೆ ಎಂದು ಹೇಳದೆ
ಗರ್ವ ಪಡಬೇಡವು
ಅವಶ್ಯಕ ಇರುವಂಗೆ ಹಂಚಿ ಖುಷಿ ಪಡು
ಆಸ್ತಿ ಮಾಡಲು ಯಾರದ್ದು ಕಬಳಿಸದಿರು
ನ್ಯಾಯ
ನೀತಿ ಧರ್ಮ ಪಾಲನೆ ಜಗದ ಮಹಾನ್
ಆಸ್ತಿಯು
ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ/ಅಮೀನಗಡ

